Monday 31 August 2015

ಬಂದೇ ಬರುವೆ

ಬಯಸಿ ಬಯಸಿ ಮಳೆಯಲಿ ನೆನೆದು
ಉಸಿರ ಬಿಗಿಸಿ ಹೆಸರನು ಕರೆದು
ಕಣ್ಣಿನ ಕಾವಲುಗಾರರ ದಾಟಿ
ಬರುವೆ ಕಾದಿರು ಹೂವನು ಹಿಡಿದು


ನಡುವೆ ಸುಳಿಯ ಸರಳನು ಮುರಿದು
ಎಲ್ಲ ವಿಧಿಯ ಬಾಗಿಲ ತೆರೆದು
ಸಣ್ಣಗೆ ಸತ್ತು ನುಣ್ಣಗೆ ಅತ್ತು
ಬರುವೆ ಕಾದಿರು ಹೃದಯವ ಮಿಡಿದು


ಸಾಯಂಕಾಲಕೆ ಸಾಕಾದರೂ ಸರಿ
ಮುಂಜಾವಿನ ಮಂಜಿತ್ತರೂ ಅಚ್ಚರಿ
ಬೆಳಗು ಮಬ್ಬಿನ ಹಂಗನು ತೊರೆದು
ಬರುವೆ ಕಾದಿರು ಉಂಗುಟ ಕೊರೆದು


ಬರಿಗೈ ಬಡತನ ಸವಿಸುತ ಬರುವೆ
ಹಿಡಿ ಪ್ರೀತಿಗೆ ಎದೆ ಗೂಡನು ಕೊಡುವೆ
ಮಲ್ಲಿಗೆ ಕರಗಳ ಕೋಮಲ ಸೋಂಕಿಗೆ
ಬರುವೆ ಕಾದಿರು ನಗುವನೇ ಮುಡಿದು


ಮೈಲಿಗಲ್ಲುಗಳಚ್ಚರಿ ಪಡಲಿ
ಗೇಲಿಗೈದವು ನಾಚಿಕೆ ಪಡಲಿ
ಅಂತರದಂತರ ನಂತರವಿರಲಿ
ಬರುವೆ ಕಾದಿರು ಕವಿತೆಯ ಬರೆದು!!


                                  -- ರತ್ನಸುತ

No comments:

Post a Comment

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...