Tuesday 29 April 2014

ತುಂಡಾಶಯಗಳು

ಬೀಡು ಬಿಡುವಾಸೆ
ಈಗಿಂದೀಗಲೇ ಕಣ್ಣಿನಲ್ಲಿ,
ಅಪ್ಪಿತಪ್ಪಿಯೂ ಕೂಡ
ತೇವಗೊಳ್ಳದೆ ಇರಲಿ ಎಂಬಾಶಯ!!

ಕಾದು ಕೂರುವ ಆಸೆ
ಖಾಲಿ ಹಣೆ ಮೇಗಡೆ,
ಚಿಂತೆ ರೇಖೆಯ ನಡುವೆ
ನಲುಗದುಳಿವುದೇ ನನ್ನ ಕೊನೆ ಆಶಯ!!

ಧ್ಯಾನಸ್ಥನಾಗುವೆ ಅಂಗೈಯ್ಯ
ತೋರುಗನ್ನಡಿ ಮುಂದೆ,
ನಾಚಿ ಸಂಕುಚಿತ-
-ಗೊಳ್ಳದಿರಲೆಂಬುದೇ ಮನದಾಶಯ!!

ಕಲೆಗಾರನಾಗಲು ಅಣಿಯಾದೆ,
ಕೆನ್ನೆ ರಂಗನು ಅದ್ದಿ
ಕಲೆಗುಂದಿದ ಶಿಲೆಗೆ
ಜೀವ ಮರುಕಳಿಸುವ ಮಹದಾಶಯ!!

ಮಧ್ಯಮ ಎದೆಯಲ್ಲಿ
ಸಂಯಮ ಕಳೆಯದೆ
ಅಂತಿಮ ಉಸಿರನ್ನು ಎಣಿಸಿ
ಪ್ರತಿ ಮಿಡಿತವನ್ನಾಲಿಸುವ ಆಶಯ!!

                                -- ರತ್ನಸುತ

No comments:

Post a Comment

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...