Tuesday 29 April 2014

ಆಗಬಾರದ್ದು ಆಗಿಯೇ ಹೋಯಿತು

ನಾನೇನು ಹೇಳುವುದು
ನೀನೆಲ್ಲ ದೋಚಿರಲು
ಮಾತುಗಳು ವ್ಯರ್ಥದ ಕಂತೆ;
ನೀನಿದ್ದ ಕಡೆಯೆಲ್ಲ
ನಾ ಚಿತ್ತ ಕಳೆದಿರಲು
ಈನಡುವೆ ಇದೇ ದೊಡ್ಡ ಚಿಂತೆ!!

ನೀ ಸಾರಿ ಹೇಳುವುದ
ಪ್ರತಿ ಸಾರಿ ಕೇಳಿದರೂ
ಬೇಸರಿಕೆ ಬರಿಸುತಲೇ ಇಲ್ಲ;
ನೀ ಎದುರು ನಿಂತಾಗ
ಅಂಗಾತ ತಿರುಗದಿರು
ಉಪವಾಸ ಸಾಯುವೆನು ಮೆಲ್ಲ!!

ನಾ ಕೊಡದ ಉಡುಗೊರೆಗೆ
ನೀನಿಡುವ ಹೆಸರುಗಳ-
ಪಟ್ಟಿಗೆ ಕೊನೆಯೆಂಬುದೆಲ್ಲಿ?
ಆಗಾಗ ನೋಡುವೆ
ಮೋಹ ಉಕ್ಕಿದ ರೀತಿ
ಆದರೂ ಅನುಮಾನದಲ್ಲಿ!!

ಇನ್ನೆಲ ಸಮಯವನು
ನಿನಗಾಗಿ ಬರೆದಿಡಲು
ಬರಬೇಕು ಒಪ್ಪಂದ ಸಹಿಗೆ;
ಏನೊಂದೂ ಬೇಡಿಕೆಯ
ಸೂಚನೆ ಇರದಲ್ಲಿ
ಒಲವೊಂದೇ ಅನಿವಾರ್ಯ ಗುಳಿಗೆ!!

ನೀನೋದುವ ಹಾಳೆ
ದಿನಕೊಂದು ಹೊಸ ರೂಪ
ಒದಗಿಸುವ ದಿನಚರಿಯು ನಾನು;
ನೀ ನಕ್ಕರೆ ಅದುವೇ
ಭಾವನೆಗೆ ತೀವ್ರತೆ
ಮಿಕ್ಕಂತೆ ತೃಣವಲ್ಲವೇನು?

                   -- ರತ್ನಸುತ

1 comment:

  1. 'ಒಲವೊಂದೇ ಅನಿವಾರ್ಯ ಗುಳಿಗೆ' ವಾರೇವ್ಹಾ ಭೆತಮುನಿಗಳೇ!!!

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...