ನೀನು ಬಂದೆ ಸನಿಹ ಹೀಗಾದೆ
ನಿನ್ನ ಮೇಲೇ ಗಮನ
ನೀನೇ ನನ್ನ ಮನದ ಇರಾದೆ ನೀನೇ ನನ್ನ ಕವನ
ಯಾರೇನೇ ಅಂದರೂ
ನಿನ್ನಲ್ಲೇ ಇರುವೆ ನಾ
ಪ್ರೇತಿಗೆ ಮೀಸಲು
ಈ ನನ್ನ ಜೀವನ
ಓ... ಓ...
ಕೆಂಬಣ್ಣದ ಸಂಜೆಗೆ
ನೀನಾದೆಯಾ ಕಾರಣ?
ಮುಂಗೋಪವ ಬೀರುವೆ
ಎದೆಯಲ್ಲಿ ಭೂ ಕಂಪನ
ಮುಂಗಾರಿನ ಆಗಮನಕೆ
ಬಿರಿದ ನೆಲ ಸಜ್ಜಾಗಿದೆ....
ಓ... ಓ...
ಆರಂಭವೇ ರೋಚಕ
ಈ ಪಯಣವಿನ್ನೂ ಸವಿ
ಒಲವಾಗುವ ಮೂಲಕ
ನಾನಾದೆನಾ ಹುಸಿ ಕವಿ
ಬೆರಳಂಚಿನ ಗೋರಂಟಿಯ
ನನ್ನೆದೆಗೆ ನೀ ಗೀಟಾಗಿಸು...
ಓ... ಓ...
No comments:
Post a Comment