ಸಂದೇಶ ಬಂತೀಗ
ಸಂತೋಷ ತಂತೀಗ
ವಿಷೇಶ ಏನಿಲ್ಲ
ಅದೇ ಕಾಡೋ ರಾಗ
ನೀ ಬರುವೆ ಯಾವಾಗ
ನೀ ಬರುವೆ ಯಾವಾಗ
ಸಿಗೋಣ ಯಾವಾಗ
ನೀನಿಲ್ಲದ ಲೋಕ
ಶೂನ್ಯ ಶೂನ್ಯನೇ
ಓ.. ಓ..ಓ..
ಹೇ ಬೀಸೋ ಗಾಳಿಯೇ ಆಲಿಸು
ನನ್ನುಸಿರ ಬಸಿಯುತ ಗೀಚುವೆ
ಈ ಕಾಗದ ಕಳುವಾಗದೆ
ಕಾಪಾಡೆಯಾ ನೀ..
ನಾ ಕ್ಷೇಮ ನೀನು ಕ್ಷೇಮವೇ
ಅನ್ನೋ ಸಾಲೇ ಹಿತವಾಗಿದೆ
ಪ್ರತಿ ಪದ ಏನೋ ಕಥೆ
ಹೇಳೋ ಥರ ಭಾಸವಾಗಿದೆ..
ನಾ ಮರಳಿ ಬಂದಾಗ
ಅಂಗಳದಿ ನಿಂತಾಗ
ತೋರಣ ತಂಪಲ್ಲಿ
ಮಲ್ಲಿಗೆ ಕಂಪಲ್ಲಿ
ನಿನ್ನ ನೆರಳೇ ಅಲ್ಲಿ
ಬೆನ್ನಿಗೆ ನಿಂತಂತೆ
ಜೀವ ಬಿಗಿದ ಹಾಗೆ
ಈ ದೂರ ಬೇಡ
ಸಾಕು ಅಂದಂತೆ..
No comments:
Post a Comment