ಮನದಾಳದ ಮಧುರ ದನಿ
ಬರಿದಾಗದ ಓ ಇಬ್ಬನಿ
ನವಿರಾದ ಪುಟದೊಂದಿದೆ
ಹೊಸ ಬಾಳು ತೆರೆದಂತಿದೆ
ನೀ ಬಂದು ಸಹಿ ಮಾಡಲು.. ಪ್ರೀತಿಯಲಿ..
ನಿನಗೆ ಹೇಳಲು
ಬಲು ಖಾಸಾ ಮಾಹಿತಿ
ಹೃದಯ ತುಂಬಿ ಬಂತು
ಅನುರಾಗ ಸಂಗತಿ
ಭಯವೇಕೋ ನನ್ನನು ಕಾಡಿದೆ
ಕನಸಲ್ಲೇ ಎಲ್ಲವ ಹೇಳಿದೆ..
ಸಲುಗೆ ಮೀರಲು
ಇದೆ ಗೆರೆಯ ಅಂತರ
ಎಲ್ಲ ಗುಟ್ಟುಗಳನು
ಹಂಚಿಕೊಳುವ ನಂತರ
ನೆರಳನ್ನು ನೆರಳಿದು ಸೋಕಲು
ಅದೂ ಕೂಡ ನಲ್ಮೆಯ ದಾಖಲು...
No comments:
Post a Comment