Saturday, 19 May 2012

ಅಲೆಮಾರಿ ಅಲೆ

ಇಲ್ಲಿವರೆಗೆ ನಾನೆದ್ದರೆ, ಅಲೆಯೊಂದು ಏಳುತ್ತಿತ್ತು
ಸುತ್ತಲೂ ಸ್ಮಶಾಣ ಮೌನ ಮಾತ್ರವೇ ಕೇಳುತಿತ್ತು
ನೋಡಿ ಸುಮ್ಮನಾಗುತಿದ್ದೆ ಲೋಕವಿಷ್ಟೇ ಅಂದುಕೊಂಡು
ಆದರೂ ಸಣ್ಣ ಕೊತೂಹಲ ಮತ್ತೆ ಯತ್ನಿಸಿತ್ತು
 
ಎತ್ತರಕ್ಕೆ ಜಿಗಿದಾಗೆಲ್ಲ, ನಾನೇ ಎಲ್ಲರಿಗೂ ಮಿಗಿಲು
ಎಂಬ ಅಹಂ ಮೂಡದಿರಲು ನಾನೇನು ಕಲ್ಲಲ್ಲ
ಮತ್ತೆ ಇಳಿಜಾರಿದಾಗ ಎಲ್ಲರ ಸಮ ಆಗುತಿರಲು
ಸಂಕೊಚಕೆ ತಲೆ ಬಾಗಿಸಿ ನಾಚಿದ್ದು ಸುಳಲ್ಲ
 
ನಾ ನಗಿಸಿದಾಟಕ್ಕೆ ನಗೆ ಮೂಡಬೇಕೆನಿಸಿ
ಒತ್ತಾಯಕೆ ಲೋಕವನ್ನು ನಗಿಸುವಂತೆ ಮಾಡಿದೆ
ಎಲ್ಲ ನದಿ ದಾರಿಗೊಂದು ಕಡಲ ತುದಿ ಇದ್ದ ಹಾಗೆ
ನನ್ನ ಅಲ್ಪತನಕೂ ಕೊನೆಗೊಂದು ಗೋಡೆ ಬೇಕಿದೆ
 
ಆಗಾಗ ನನಗೂ ಮೈ ಭಾರವೆನಿಸುತಿತ್ತು
ಅನ್ಯರ ಜಿಗಿತಕ್ಕೆ ನನ್ನ ನಿರ್ಲಕ್ಷ್ಯವಿತ್ತು
ಅಲೆಯೆಬ್ಬಿಸಿ ಯುಗ ಕಳೆದರು ಅಲ್ಲೇ ಕೊಳೆಯುತ್ತಿದ್ದೆ
ಬದಲಿಗೆ ಹಿಂಬರುವ ಅಲೆಗೆ ಸ್ಪಂದಿಸಬಹುದಿತ್ತು
 
ಈಗ ಗೋಚರವಾಗಿದೆ ನನ್ನ ಅಸ್ತಿತ್ವ
ಅರಿತುಕೊಂಡೆ ಕಡಲೊಳಗಿನ ಪಯಣದ ಮಹತ್ವ
ತಿದ್ದುಕೊಂಡೆ ನನ್ನ ಬೆನ್ನ ನಾನೇ ತಟ್ಟಿಕೊಳ್ಳಲಾರೆ
ಎಲ್ಲವೂ ಕಾಲ ಕಲಿಸಿಕೊಟ್ಟ ಮಹತ್ವ
 
ಅರೆ ಬರೆ ಕನಸುಗಳಿಗೆ ಬೆಂಬಲ ಪರರ ಕನಸು
ನನ್ನ ಕನಸೂ ಕೂಡ ಚೆತರಿಸಿತು ಕೆಲವರ
ಅಲ್ಲಿ ಇಲ್ಲಿ ಅಲೆಯುತಿದ್ದೆ ಯಾವುದೋ ಹುಡುಕಾಟಕೆ
ಸುತ್ತಲೇ ಇತ್ತು ನನಗೆ ಸೂಕ್ತವಾದ ಪರಿಸರ
 
ಈಗ ಹಿಂಬರುವ ಅಲೆಗೆ ನನ್ನ ಸಹಕಾರವಿದೆ
ಮುಂದೆ ಎದ್ದೆ ಅಲೆಗೆ ನನ್ನ ಪೂರ್ಣ ಅಧಿಕಾರವಿದೆ
ಈಗ ಬೆಳೆಸೋ ಪಯಣದಲ್ಲಿ ವಿನೂತನ ಖುಷಿಯಿದೆ
ಇನ್ನು ತೀರ ತಲುಪೋ ಸರದಿ ನನ್ನದಾಗಬೇಕಿದೆ......
 
                                              --ರತ್ನಸುತ

Saturday, 12 May 2012

ಆ ಸಂಭಾಷಣೆ

ಅದೊಂದು ಅನರ್ಥ, ಅಪೂರ್ಣ, ಆನಂದಮಯ ಅನುಭವ
ವರ್ಣನೆಗೆ ನಿಲುಕದ ಅಪೂರ್ವ ಕಲರವ
ಹೇಗೆಂಬುದೇನು ಹೇಳಲಾರೆ
ಹಾಗೆ ಮೊದಲಾಗಿ ಕೊನೆಗೊಂಡ ರಮಣೀಯ ಸಂಭವ
 
ನಾವಿಬ್ಬರು ಮಾತನಾಡಿಲ್ಲ ಅಲ್ಲಿ
ಎದುರಿಗಿತ್ತು ಪ್ರತಿಬಿಂಬದ ಕನ್ನಡಿ
ನನ್ನಿಂದ ಹೋರಡಿದ್ದು ಅವನಿಗೆ ಪ್ರತಿಧ್ವನಿ
ಅವನಿಂದ ಕೇಳಿಸಿತು ನನ್ನದೇ ಸ್ವಂತ ದ್ವನಿ
 
ಕಪ್ಪು- ಬಿಳಿ ಚಿತ್ರದಂತಿತ್ತು ನೆನಪುಗಳು
ರೆಪ್ಪೆ ಬಡಿದರೆ ಜಾರಬಹುದಿತ್ತು ಕಣ್ಗಳು
ಅಷ್ಟು ಭಾರದ ಕನಸುಗಳ ತುಂಬಿಕೊಂಡೆವು
ಸಾಧನೆಯ ಸಲುವನ್ನು ಅದರೊಳಗೆ ಕಾಣಲು
 
ಸಾಗಿತ್ತು ಬೇಕು-ಬೇಡದ ಅಂಧ ಚರ್ಚೆ
ಒಂದಷ್ಟು ಹೊತ್ತು ಹಳೆ ಕೆಲಸದ ವಿಮರ್ಶೆ
ಮರೆತದ್ದು ಒಂದೇ, ಸಮಯದ ಪೀಕಲಾಟ
ಕಂಡದ್ದು ಮಾತ್ರ ವರ್ಣಮಯ ಪರಿಶೆ
 
ನಾ ಕೊಟ್ಟೆ ಅವನಿಗೆ ಕಲೆಗೊಂದು ಗುರುತು
ಮಾತಾಡಿಕೊಂಡೆವು ಇಬ್ಬರನು ಕುರಿತು
ಅವನಿಟ್ಟ ಪ್ರತಿಕ್ರಿಯೆಗೆ ಬೆಲೆ ಕಟ್ಟಲಾರೆ
ಒಬ್ಬರಿಗೊಬ್ಬರು ಅಲ್ಲಿ ಸೋಲಬೇಕಿತ್ತು
 
ತುಂಬಿದ ಮನಸುಗಳು ಮಾತಲ್ಲಿ ಧ್ವನಿಸಿ
ದೂರದಲೇ ಉಳಿದರೂ ಹಾಗೊಮ್ಮೆ ಬಳಸಿ
ಮೈ ಮರೆತು ಮನಸಾರೆ ಜೋರಾಗಿ ನಕ್ಕು
ಖುಷಿ ಎಂಬುದೇನೆಂದು ಜೀವನಕೆ ತಿಳಿಸಿ
 
ಮರೆಯಾಗೋ ವೇಳೆಗೆ ಮೌನದ ಆಣೆ
ಮರೆತೂ ಮರೆಯಲಾರದವನು ಅವನೆ
ತುಂಬಿಕೊಂಡ ಹೊಸ ಪರಿಚಯಕೆ ಎಡೆ ಮಾಡಿಕೊಟ್ಟು
ಬಿಗಿಸಿದೆ ಬೀಗವ ನನ್ನೆದೆಯ ಕೋಣೆ
 
ನಾ ಹೀಗಿರಲು ಆತ ಕಾರಣ ಪುರುಷ
ಹೇಗಿದ್ದರೂ ಇದುವೆ ಗುರುತಾಗೋ ಕಲಶ
ಈ ಎಲ್ಲ ಗುರುತುಗಳ ಒಟ್ಟಾರೆ ನೋಡಲು
ಜೊತೆಗಾತ ಇರಲದುವೆ ಸ್ಮರಣೆಯ ದಿವಸ....
 
 
                                                   -- ರತ್ನಸುತ

Monday, 7 May 2012

ಹೆಜ್ಜೆ ಗುರುತು

22/11/2011 ರಲ್ಲಿ ಶುರುವಾದ  ನನ್ನ  ಹೊಸ  ಪಯಣ  ಇಂದಿಗೆ (07/05/2012)ನೂರರ  ಸಂಭ್ರಮ ಆ ಚರಿಸುತ್ತಿದೆ,  ಈ   ಸಂಧರ್ಭದಲ್ಲಿ ನನ್ನ ನೂರು ಹೆಜ್ಜೆ ಗುರುತುಗಳು  ಹೀಗಿವೆ:


  1. ಬೇಕಿಗಿಲ್ಲ  ಬ್ರೇಕು
  2. ಮುಚ್ಚಿಟ್ಟ  ಮಾತುಗಳು
  3. ಮನ್ಮಥ  ಯಾಘ  ಕನಸು
  4. ಕಾಲದ ಮುಳ್ಳೇ, ಸ್ವಲ್ಪ ನಿಲ್ಲೇ
  5. ಕಳ್ಪೂಜೆ
  6. ಬೀದಿ ಜಗಳ
  7. ಬದುಕಿಗೆ ಮೂರು ಮುಖಗಳು
  8. ಅವಳು - ಇನ್ನೂ ಅರ್ಥವಾಗಿಲ್ಲ
  9. ಅಪರಾಧ
  10. ಹಾರಾಟದ ಗಾಳಿಪಟ
  11. ಮಾನಗೆಟ್ಟ ಮನ್ಸ
  12. ನಾ ಬಯಸಿದ್ದಲ್ಲ 
  13. ಘಧ್ರೋ ಗೌಡ
  14. ನನ್ನ ಗೋಳು ನನ್ನದು
  15. ನೀ ಕೊಟ್ಟ ಉಡುಗೊರೆ
  16. ಮೂರ್ಖಾವಲೋಕನ
  17. ರಸಋಷಿ ನಮನ
  18. ನಾನು - ಹೀಗೂ ಉಂಟು
  19. ತೇಲಿ ಬಿಟ್ಟ ಕವನ 
  20. ವರ್ಷದ ಕೊನೆ
  21. ನೀನಿಲ್ಲವಾದಲ್ಲಿ
  22. ವಿಪರ್ಯಾಸ
  23. ಸುಳ್ಳು ಕಥೆಯಾದರೂ, ಕಥೆ ಸುಳ್ಳಲ್ಲ
  24. ನೆರೆಪೀಡಿತ ಬದುಕು
  25. ಕಾರು ಬಾರು
  26. ಹೋರಾ
  27. ಏಕಪಾತ್ರಾಭಿನಯ  
  28. ಕಾವ್ಯ ಭಾಷೆ
  29. ಜ್ಞಾನ ದಾಸೋಹ
  30. ಅಲೆಮಾರಿ ಮನಸಿನ ಒಂದು ಹುಚ್ಚಾಟ
  31. ಹಿಮ ಚುಂಬನ
  32. ಒಬ್ಬಂಟಿಗ
  33. ನಾನು
  34. ಎಚ್ಚರ ಗೆಳತಿ, ನಾ ಕೆಟ್ಟವನಲ್ಲ
  35. ಕ್ಷಮಿಸು ಗೆಳೆಯ
  36. ಹಿತ್ತಲ ಹೂವು
  37. ನಿಮ್ಮಿಂದ ನಾನು
  38. ಮಂಕು ತಿಮ್ಮ
  39. ಕೃತಜ್ಞತಾ ಕವನ
  40. ಮುಕ್ತ ಧ್ವನಿ
  41. ಹೀಗೂ ಒಂದು ಕವನ
  42. ಅಯ್ಯೋ ಗಂಡಸೇ 
  43. ಹುಚ್ಚು ಮನ
  44. ಗಾಳಿಯಾದ ಬೆಳಕು
  45. ನನ್ನದಲ್ಲದ ನೆನಪು 
  46. ಒಪ್ಪುವಿರಾ... ನಾನೂ ಕವಿಯೆಂದು?
  47. ಕನಸೂರಿಗೆ ಪಯಣ
  48. ಕ್ಷಮಿಸು ತಾಯೆ
  49. ತಿಳ್ಧೋರ್ ಮಾತು
  50. ಅಮಂಗಳ ನಾನು
  51. ನನ್ನವಳನಿಸದ ನನ್ನವಳು
  52. ಬರೇ ಬರೆಯದ ಕವನ
  53. ಅಸಂಭವ ಪ್ರೀತಿ
  54. ಬಣ್ಣ ಮಾಸಿದ ಗೋಡೆ
  55. ನಿಮಗೊಂದು ನಮನ 
  56. ಯೋಗ್ಯನಲ್ಲ ನಾನು ನಿನಗೆ
  57. ಮನದೊಳಗೆ ಹೀಗೊಂದು ಪದ
  58. ಕವಿಯ ರಾಜ ಮಾರ್ಗ
  59. ನಾನೊಬ್ಬ ರಾಕ್ಷಸ 
  60. ಬಡವ v /s ಸಿರಿವಂತ
  61. ಬಟ್ಟರ ಬಾಳು
  62. ಇದೂ ಒಂದು ನೆನಪು
  63. ಆ ಒಂದು ನೋಟ 
  64. ಇದೂ ನನ್ನ ಅವತಾರವೇ
  65. ಹಸಿದಾಗಿನ ಕವಿಯ ಪಾಡು
  66. ಅಪೂರ್ನತೆಯೇ ಪೂರ್ಣತೆ
  67. ಅನರ್ಥ ಮಾತುಗಳು 
  68. ಬೇಜಾರು ಬಾಳು
  69. ಎಲ್ಲಿಂದೆಲ್ಲಿಗೆ ಹೋದೆ?
  70. ಆತ್ಮಹತ್ಯೆಗೆ ನನ್ನ ಒಲವು?
  71. ನೆನಪಿನಂಗಳ
  72. ಕಲ್ಪನೆ
  73. ಬಾ ನೋಡು ಗೆಳತಿ
  74. ಯುರೋ ಪ್ರವಾಸದ ಮೊದಲದಿನ
  75. ಯುರೋ ಪ್ರವಾಸದ ಮೊದಲೆರಡು ದಿನಗಳು
  76. ಸ್ವಿಜ್ಜ್ ಸಾಂಗತ್ಯ 
  77. ನನ್ನ ವಿಶ್ವ ಮಿತ್ರ
  78. ಮನದ ಮಂಥನ
  79. "ತು" ಪ್ರಾಸದ ಕಾವ್ಯ 
  80. ಯಾರೋ ಕೆತ್ತಿದ ಶಿಲೆಗೆ ನಾ ಸೋತ ಬಗೆ 
  81. ಭಾನುವಾರ ಸಂಜೆ
  82. ಕೊನೆಗೂ ಕತ್ತಲಾಯಿತು
  83. ಪ್ರಭಾವಿ ಸಾಲುಗಳು ಮಿತ್ರನಿಂದ 
  84. ಬ್ಯಾಚುಲರ್ ಬಾಯ್ಸ್ ಫೀಲಿಂಗ್ಸ್
  85. ದಡ್ದನಾಗಿಸಿದ ಕಾವ್ಯ
  86. ಬಿಸಿಲ ಮಳೆ
  87. ಆಡದ ಮಾತು 
  88. ಮುನ್ನಡೆ
  89. ಅವಳ ಕಣ್ಣೀರಿನೆದುರು
  90. ಅವನ ಕುರಿತು ಬರೆದೆನೇಕೆ?
  91. ನಾದಮಯ 
  92. ಕಾವ್ಯ ಹರಿದ ಮನಸು 
  93. ನಾಲ್ಕು ಗೋಡೆ ಸುತ್ತ 
  94. ಅನರ್ಥ ಪಯಣ 
  95. ಬಾಡೂಟಕೆ ಕಾಯೋದ್ಯಾಕೆ?
  96. ಬಿಳಿ ಕುರಿಗಳ್ ಮಧ್ಯೆ, ಕರಿ ಕುರಿ
  97. ಬಹಿಷ್ಕಾರ 
  98. ಎಲ್ಲ ಮುಗಿದ ಮೇಲೆ
  99. ಶತಕದ ಹೊಸ್ತಿಲಲ್ಲಿ
  100. ಸುಗ್ಗಿ ಕಾಲ 

                                                                  -ರತ್ನಸುತ 

Sunday, 29 April 2012

ನನ್ನ "ವಿಶ್ವ"ಮಿತ್ರ

ಗೆಳೆಯ ಅಗೋ ಕರೆ ನೀಡಿದ ಬಹಳ ದಿನದ ನಂತರ
ಮಾತನಾಡಿದಷ್ಟ್ಹೊತ್ತು ಎಲ್ಲಿ ಮಾಯ ಬೇಸರ
ಚೇಷ್ಟೆ ಮಾಡಿಕೊಂಡು ಕಳೆದ ಒಂದೊಂದು ನಿಮಿಷಕೂ
ಜಾರಲು ಮನಸಾಗದೆ ದಾರಿ ಮಾಡಿತೆಲ್ಲಕೂ

ಅತಿರೇಖವ ನಿಭಾಯಿಸಿ ದಡ್ಡತನವ ತೋರಿಸಿ
ಪೆದ್ದ ಪೆದ್ದ ಆಲೋಚನೆಗಳಿಗೆ ತಲೆಯ ಬಾಗಿಸಿ
ಅವನೊಮ್ಮೆ ನಕ್ಕರೆ ಇಲ್ಲೊಮ್ಮೆ ಚಿವುಟು
ಜೊತೆಗೆ ನಕ್ಕಾಗ ಉಳಿಯಿತೆಲ್ಲಿ ನಡುವೆ ಒಗಟು

ಜೊತೆಗೆ ಸಾಗಿ ಬಂದೆವಲ್ಲಿ ಬಾನೆತ್ತರ ವಿಹರಿಸಿ
ಕಾಣೆಯಾದ ನೆನಪುಗಳ ಕಣ್ಣ ಮುಂದೆ ಪಸರಿಸಿ
ಬೀಗಿದೆವು ಒಬ್ಬೊಬ್ಬರು ಮತ್ತೊಬ್ಬರ ಕಂಡು
ಸಾಗಿದೆವು ಮುಂದೆ ಹಾಗೆ ಮಾತನಾಡಿಕೊಂಡು

ಇಟ್ಟುಕೊಳ್ಳದೆ ಯೋಜನೆ ಮಾಡಿಕೊಳ್ಳದೆ ತಯಾರಿ
ಮಾತಿನ ಬಾಣಗಳ ಸೀದ ಹೇಗೆ ಗುರಿಗೆ ಗುರಿಯಿಟ್ಟು?
ತಿಳಿವ ಮೊದಲೇ ಗುಟ್ಟುಗಳನು ಬಹಿರಂಗ ಪಡಿಸಿದೆವು
ಅನುಮಾನಗಳಿಗೆ ಪೂರ್ಣ ವಿರಾಮವನು ಕೊಟ್ಟು

ಎಲ್ಲವನ್ನು ಹಂಚಿಕೊಂಡು ಒಂದಿಷ್ಟು ಉಳಿಸಿಕೊಂಡು
ಮುಂದೆಂದಾದರೂ ಹೇಳಬೇಕೆನಿಸಬಾರದೆ?
ಮುಗಿಯಿತೆಂದು ಅಂದುಕೊಳ್ಳುವಷ್ಟರಲ್ಲಿ  ಮತ್ತೊಂದು ಚರ್ಚೆ
ಗೆಳೆಯರ ಮಾತಿಗೂ ಒಂದು ಅಂಕುಶ ಇರಬಾರದೆ?

ಮುಗಿಯುವಷ್ಟರಲ್ಲಿ ಮನಸು ಹಗುರವಾಗಿ ಹಾರುತ್ತಿತ್ತು
ಮುಗಿದ ಮೇಲೆ ಮತ್ತದೇ ನಿರೀಕ್ಷೆಯ ಭಾರ
ಕಡಲ ಅಲೆಗಳಾಗಿ ನಮ್ಮ ಸಂದೇಶ ರವಾನಿಸಲು
ನಾನೊಂದು ತೀರವಾದೆ, ಮತ್ತವನೊಂದು ತೀರ.......


                                                       -ರತ್ನಸುತ

Friday, 27 April 2012

ಆಡದ ಮಾತು

ತುಟಿ ದಾಟದೆ ಹೊಸ್ತಿಲಲ್ಲೇ, ಕುಳಿತಿತ್ತು ಒಂದು ನುಡಿ
ಏನು ಅಂಜಿಕೆಯೋ ಪಾಪ, ಅರಿತು ದಾರಿ ಮಾಡಿ ಕೊಡಿ
ಒಮ್ಮೊಮ್ಮೆ ಇದ್ದ ದಾರಿ, ಇಲ್ಲದಂತೆ ತೋಚುವುದು
ಬಂದದ್ದು ಬರಲಿ ಅದರ ಇಷ್ಟಕ್ಕೆ ಬಿಟ್ಟು ಬಿಡಿ

ಹೊರ ಬರುವ ಕಾಲಕ್ಕೆ ಮಿಂಚಿ ಹೋದ ಸಮಯವಾಗಿ
ಒಳ ಆಸೆಗಳೆಲ್ಲ ಅಲ್ಲೇ ಕೊಳೆತಂತಿದೆ ಮಾಗಿ,ಮಾಗಿ
ಇದ್ದ ನೋವು ಹೆಚ್ಚುವುದು ಕೊಡದಿದ್ದರೆ ಕಾರಣ
ಆದ ನೋವು ಸಹಿಸಲಾಗದು ಇರದಿದ್ದರೆ ಕಾರಣ

ಕಿವಿಗಳಿಲ್ಲದಾಗಲೇ ಹೆಚ್ಚು ನುಡಿವ ಹಂಬಲ
ಎಷ್ಟೇ ಪಳಗಿ ಇದ್ದರು ಆ ಕ್ಷಣವೇ ಚೊಚ್ಚಲ
ಅದಕೆ ತಕ್ಕಂತೆ ಮನ ದೃಢವಲ್ಲದೆ ಕೊರಗಿತ್ತು
ಅದಕೇ ಆ ಗಳಿಗೆಗೆ ನಿರ್ಧಾರಕಿರದು ಬೆಂಬಲ

ಕೂಗಿ ಕರಗಿ ಹೋಗುತಿದೆ, ಸದ್ದಿಲ್ಲದೇ ಕೂಗೊಂದು
ಕರೆಗೆ "ಹೂ"ಗೋಡುವವರು ತೋಚದೆ ಯಾರೆಂದು
ಮನಸಿನಲ್ಲಿದೆ ಆ ಅಪರಿಚಿತ ಭಾವಚಿತ್ರ
ಕೊರಳಿಗೆ ತಿಳಿವುದ್ಹೆಗೆ, ನಿಲ್ಲಿಸಿದರು ಸಾಕೆಂದು

ಪೂಜೆಗೈದು ಶುಭವಾಗದಿರಲು ದೇವರಲ್ಲ ಕೆಟ್ಟವ
ಇದ್ದ ಹೂವ ಬಾಡ ಬಿಟ್ಟು ಹುಡುಕ ಬೇಡಿ ಗಂಧವ
ಕಿರಣಗಳಿಗೆ ಜಾರಿ ಬಂದು ಬೆಳಕ ಬೀರೋ ಗುಣವಿದೆ
ಕಣ್ಣು ಮುಚ್ಚಿ ಕತ್ತಲಿಗೆ ಸೊಲುತಾನೆ ಮಾನವ

ಅಳುವಾಗಿನ ಹನಿಗಳಿಗೆ, ಹೇಳ ಬೇಕು ಕಾರಣ
ಇಲ್ಲವಾದರೆ ಹರಿಯಲೂ ಹಿಂಜರಿಯ ಬಹುದವು
ಆಡದ ಮಾತುಗಳಿಗೆ ಶಿಕ್ಷೆಯಾಗಬೇಕೆಂದರೆ
ಕಣ್ಣೀರಿನ ರೂಪ ತಾಳೆ, ಬಿಟ್ಟು ಹೋಗಬೇಕವು.............


ಮಾಡಿದ ತಪ್ಪುಗಳಿಗೆ ಪ್ರಾಯಷ್ಚಿತವಾಗಿ ಮನಸಾರೆ ಅತ್ತು ಬಿಡಿ, ಮನಸ್ಸು ಹಗುರಾದರೂ ಆಗಬಹುದು.......


                                                                                    -ರತ್ನಸುತ

Wednesday, 25 April 2012

ಶುಭಾಷೆಯ ಗೆಳತಿ

ನಾ ಬರದಷ್ಟು ದೂರುಳಿದೆ ನಿನ್ನ ಮದುವೆಗೆ
ಎಷ್ಟು ಕಷ್ಟವಾಯಿತೋ ಗೊತ್ತೇ ನನ್ನ ನೆರಳಿಗೆ
ನನ್ನ ಬಿಟ್ಟು ಹಾರಿ ಬರಲು ಸಜ್ಜಾಗಿತ್ತು ಅದು
ಹಿಡಿದಿಟ್ಟ ಅಷ್ಟು ಹೊತ್ತೂ ಕೆಲಸ ಬಿತ್ತು ಬೆರಳಿಗೆ


ಅನಿಸಿತು, ಕರೆ ಮಾಡಿ ಸಾದಾರನವಾಗುವುದು ಬೇಡ
ಬೆಂಬಲಕೆ ನಿಂತಿತ್ತು ನನ್ನ ಮನವೂ ಕೂಡ
ಕಾಣಿಕೆಯೂ ಕೊಡದಷ್ಟು ಪಾಪಿಯಾದೆ ನಿನಗೆ ಇಂದು
ಮುಡಿಪಾಗಿರಿಸಲಾಗಲಿಲ್ಲ ನಿನಗೊಂದು ಹಾಡ

ಇಷ್ಟು ದಿನ ಆಗಿದ್ದೆ ಕಡಲೊಳಗಿನ ಒಂದು ಅಲೆ
ಈಗ ಸಿಕ್ಕಿರುವುದು ನಿನಗೂ ಒಂದು ತೀರ
ಯಾರಿಂದಲೂ ದೂರಪದಿಸಲಾಗದಂತೆ ಹೀರಿಕೊಳಲಿ
ನೀ ಬಿಡದೆ ಸೇರಿಕೋ ಅದರ ಅಂತರಾಳ


ನೀನಾಗು ಕಾಲಿ ಆಗಸಕೆ ಮಳೆ ಬಿಲ್ಲು
ನಿನ್ನವನ ಸಾಂಗತ್ಯದಿ ಎಲ್ಲವನ್ನು ಗೆಲ್ಲು
ಆಗಾಗ ಹಿಂದಿರುಗಿ ನೋಡಬೇಕು ನಡೆದ ದಾರಿ
ಅದಕಾಗಿ ತಿರುಗಿನೋಡಲೆಂದು ಒಮ್ಮೆ ನಿಲ್ಲು


ಅರಸುವಷ್ಟು ಹಿರಿಯನಲ್ಲ, ಹೇಳುವಷ್ಟು ಜಾಣನಲ್ಲ
ನಿನ್ನ ಜೀವನದಲಿ ಹೊರಳಿಸಿದ ಒಂದು ಪುಟ ನಾನು
ನಿನ್ನ ಹೊಸ ಬದುಕಿನಲ್ಲಿ ಹೀಗೊಂದು ಗುರುತ ಕೊಟ್ಟು
ನೆನಪಾಗಿ ಉಳಿಯುವ ಈ ಯತ್ನ ನನ್ನದು..........


ಹಸಿರಾಗಿರಲಿ ನಿನ್ನ ಬಾಳು ಎಂದಿನಂತೆ, ಇದೆ ಗೆಳೆಯರೆಲ್ಲರ ಪರವಾಗಿ ನನ್ನ ಕೋರಿಕೆ. ಅಭಿನಂದನೆ ಗೆಳತಿ.

                                                                            ಇಂತಿ ನಿನ್ನ ಮಿತ್ರ,
                                                                                  - ರತ್ನಸುತ


ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...